ಪ್ರತಿನಿಧಿ ವರದಿ, ಕೃಷ್ಣರಾಜಪೇಟೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಮುಖ್ಯಾಧಿಕಾರಿ ಸತೀಶ್ ಮನವಿ ಮಾಡಿದರು.
ಇದೇ ಏಪ್ರಿಲ್ ೨೬ರಂದು ಪ್ರಜಾತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯ ಅಂಗವಾಗಿ ಸಂಸದರ ಆಯ್ಕೆಗಾಗಿ ಮತದಾನ ಪ್ರಕ್ರಿಯೆ ಇರುವುದರಿಂದ ಯುವಕ ಯುವತಿಯರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ರೈತ ಬಾಂಧವರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯೋಗ್ಯ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿ ಸಧೃಡವಾದ ಸಶಕ್ತ ಸರ್ಕಾರ ಆಸ್ತಿತ್ವಕ್ಕೆ ಬರಲು ಸಹಕರಿಸಬೇಕು ಎಂದು ಪುರಸಭೆಯ ಮುಖ್ಯ್ಯಾಧಿಕಾರಿ ಸತೀಶ್ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮತದಾನದ ಅಂಗವಾಗಿ ಜಾಗೃತಿ ಮೆರವಣಿಗೆ ನಡೆಸಿದ ಪುರಸಭೆಯ ಸಿಬ್ಬಂದಿಗಳು ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿ ಕೈಯ್ಯಲ್ಲಿ ಪೋಸ್ಟರ್ ಗಳು ಹಾಗೂ ಬಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.
ಮುಖ್ಯ್ಯಾಧಿಕಾರಿ ಸತೀಶ್ ಕಡ್ಡಾಯ ಮುಕ್ತ ನ್ಯಾಯ ಸಮ್ಮತ ಮತದಾನ ಕುರಿತು ಪ್ರಮಾಣ ವಚನ ಭೋಧಿಸಿದರು
ಕೆ.ಆರ್.ಪೇಟೆ ಬಸ್ ನಿಲ್ದಾಣ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಎಪಿಎಂಸಿ ಆವರಣದಲ್ಲಿ ಮತದಾನದ ಬಗ್ಗೆ ಜಾಗೃತಿಯ ಅರಿವು ಮೂಡಿಸಲಾಯಿತು.
ಪುರಸಭೆಯ ಕಂದಾಯಾಧಿಕಾರಿ ರವಿಕುಮಾರ್, ಆರೋಗ್ಯ ಪರಿವೀಕ್ಷಕ ಅಶೋಕ್, ಪರಿಸರ ಎಂಜಿನಿಯರ್ ಅರ್ಚನಾ, ಸಹಾಯಕ ಎಂಜಿನಿಯರ್ ರಂಜನಿ, ಎಚ್.ಪಿ.ನಾಗರಾಜು, ಕುಪ್ಪಳ್ಳಿ ಸತೀಶ್, ಚುನಾವಣೆ ಶಾಖೆಯ ಶಿರಸ್ತೇದಾರ್ ಹರೀಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ರಾಜಸ್ವನಿರೀಕ್ಷಕ ಜ್ಞಾನೇಶ್, ಹರೀಶ್, ಚಂದ್ರಕಲಾ ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ: ೦೪ ಕೆ.ಆರ್.ಪೇಟೆ ೦೧ ಕೃಷ್ಣರಾಜಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮತದಾನದ ಅಂಗವಾಗಿ ಮುಖ್ಯಾಧಿಕಾರಿ ಸತೀಶ್ ಅವರ ನೇತೃತ್ವದಲ್ಲಿ ಜಾಗೃತಿ ಮೆರವಣಿಗೆ ನಡೆಸಿದ ಪುರಸಭೆಯ ಸಿಬ್ಬಂದಿಗಳು ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿಗಳು ಕೈಯ್ಯಲ್ಲಿ ಪೋಸ್ಟರ್ಗಳು ಹಾಗೂ ಬಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು.