ಪ್ರತಿನಿಧಿ ವರದಿ ಮೈಸೂರು
ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಪ್ರತಿಯೊಬ್ಬರೂ ಖಚಿತವಾಗಿ ಮತದಾನ ಮಾಡಲು ಮುಂದಾಗಿ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮನವಿ ಮಾಡಿದರು .
ಜಿಲ್ಲಾ ನಗರಾಭಿವೃದ್ಧಿ ಕೋಶ ಮೈಸೂರು ಜಿಲ್ಲಾ ಮೈಸೂರು ಲೋಕಸಭಾ- 2024 ರ ಸಂಬಂಧ ಮತದಾನ ಜಾಗೃತಿ ಕಾರ್ಯಕ್ರಮವನ್ನು ವಾರ್ಡ್ ನಂ.10 ರಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗ ಪಪಂವತಿಯಿಂದ ಸ್ವ-ಸಹಾಯ ಗುಂಪಿನೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವ-ಸಹಾಯ ಗುಂಪಿನೊಂದಿಗೆ ರಂಗೋಲಿ ಸ್ಪರ್ಧೆ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ಈ ಜಾಗೃತಿ 45 ದಿನಗಳು ವಿವಿಧ ರೀತಿ ನಡೆಸಲಿದ್ದು ಬಸ್ ನಿಲ್ದಾಣಗಳಲ್ಲಿ ಮತದಾನದ ಹಾಡು ಹಾಕಿ, ಆಟೋ ಮೂಲಕ ಪ್ರಚಾರ ಮಾಡುವುದು, ವಾಣಿಜ್ಯ ಉದ್ದಿಮೆದಾರರ ಸಂಘದೊಂದಿಗೆ ಪ್ರಮುಖ ಬೀದಿಗಳಲ್ಲಿ ಚುನಾವಣಾ ಪ್ರತಿಜ್ಞಾ ವಿಧಿ ಪಡೆಯುವ ಮೂಲಕ, ಪೌರಕಾರ್ಮಿಕರು ಹಾಗೂ ನೀರು ಸರಬರಾಜು ಸಹಾಯಕ ರೊಂದಿಗೆ ಚುನಾವಣೆ ಕುರಿತು ತಮಟೆ ಪ್ರಚಾರ ಮಾಡುವ ಮೂಲಕ ಪಟ್ಟಣದ ವಿವಿಧ ಬಡಾವಣೆಯಲ್ಲಿ ಈ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಪ್ರತಿಯೊಬ್ಬರು ಮತದಾನದ ಈ ಜಾಗೃತಿಯನ್ನು ನೀವು ತಿಳಿದುಕೊಂಡು ಮತ್ತೊಬ್ಬರಿಗೂ ತಿಳಿಸುವ ಪ್ರಯತ್ನ ಮಾಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ವಾರ್ಡ್ ನಂ.10ರಲ್ಲಿ ಚುನಾವಣೆ ಕುರಿತು ರಂಗೋಲಿ ಸ್ಪರ್ಧೆಯಲ್ಲಿ ಮತದಾನದ ಕುರಿತಾದ ರಂಗೋಲಿ ಬಿಡಿಸಲಾಯಿಯಿ.
ಪಪಂ ಮುಖ್ಯಾಧಿಕಾರಿ ಮಂಜುನಾಥ್ ಆರ್.ಐ.ಕೆ.ರಾಮು ಪ್ರಥಮ ದರ್ಜೆ ಸಹಾಯಕ ಅರುಣ್ ಆರಾಧ್ಯ , ಸಮುದಾಯ ಸಂಘಟಕರಾದ ನಳಿನಿ, ಸಿಆರ್ ಪಿ ಮೇಘನಾ, ರಂಜಿತಾ, ಹಾಗೂ ಸ್ವ-ಸಹಾಯ ಗುಂಪಿನ ಸರ್ವ ಸದಸ್ಯರು ಇದ್ದರು.