ಪ್ರತಿನಿಧಿ ವರದಿ ಹಾಸನ
ಯಗಚಿ ಜಲಾಶಯವು ಭರ್ತಿಯಾಗಿದ್ದು, ಜಲಾಶಯದಲ್ಲಿನ ನೀರಿನ ಲಭ್ಯತೆಗೆ ಅನುಗುಣವಾಗಿ ಜನ ಜಾನುವಾರುಗಳಿಗೆ, ಕುಡಿಯುವ ನೀರಿನ ಉದ್ದೇಶದಿಂದ ಕೆರೆ ಕಟ್ಟೆಗಳಿಗೆ ನೀರನ್ನು ತುಂಬಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಬೇಲೂರು ಯಗಚಿ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಆ.10 ರಿಂದ 20 ರವರೆಗೆ (10 ದಿನಗಳು ಮಾತ್ರ) ಯಗಚಿ ಎಡದಂಡೆ ನಾಲೆ, ಕೂಡ್ಲೂರು ನಾಲೆ, ಕೀತೂರು ನಾಲೆ, ಹಾಲುವಾಗಿಲು ಪಿಕಪ್ ನಾಲೆಗಳಿಗೆ ನೀರನ್ನು ಹರಿಸಲಾಗುವುದು ಎಂದರು. ಆದ ಕಾರಣ ಅಚ್ಚುಕಟ್ಟಿನಲ್ಲಿ ಬರುವ ರೈತರು ನಾಲಾ ನೀರನ್ನು ಆಧರಿಸಿ ಕೃಷಿ ಚಟುವಟಿಕೆಗಳಿಗೆ ಜಮೀನುಗಳನ್ನು ಪೂರ್ವ ಸಿದ್ದತೆ ಮಾಡಿಕೊಳ್ಳಲು ರೈತ ಬಾಂಧವರು ಸಹಕರಿಸಲು ಮನವಿ ಮಾಡಿದರು.