ಮೈಸೂರು: 1992ರಲ್ಲಿ ಘಟನೆಗೆ ಮತ್ತೆ ಮರುಜೀವ ನೀಡಲಾಗಿದೆ ಅಂದಿನ ರಾಮ ಜನ್ಮ ಭೂಮಿ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ, ನಮ್ಮನ್ನು ಬಂಧಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಶಾಸಕ ಟಿ.ಎಸ್.ಶ್ರೀವತ್ಸ ತರಾಟೆ ತೆಗೆದುಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಿನಲ್ಲಿ ರಾಮ ಇದ್ದಾನೆ. ರಾಮನ ರೀತಿ ವರ್ತನೆ ಮಾಡಿ ರಾವಣನ ರೀತಿ ನಡೆದುಕೊಳ್ಳಬೇಡಿ. ಡಿ.ಕೆ. ಶಿವಕುಮಾರ್, ಡಾ.ಜಿ.ಪರಮೇಶ್ವರ್ ಹೆಸರಿನಲ್ಲೂ ದೇವರಿದ್ದಾನೆ. ನಿಮ್ಮ ಹೆಸರುಗಳಿಗೆ ಮಾತ್ರ ದೇವರ ನಾಮ ಬೇಕು ಆಚರಣೆಗೆ ಬೇಡವೇ ? 2013ರಲ್ಲಿ ನಿಮ್ಮದೇ ಸರ್ಕಾರವಿತ್ತು. ಆಗ ಯಾಕೆ ಮರು ತನಿಖೆ ಮಾಡಲಿಲ್ಲ. 22ಕ್ಕೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಇಂತಹ ವೇಳೆಯಲ್ಲಿ ಕರಸೇವಕರನ್ನು ಬಂಧಿಸಿರುವುದು ಸರಿಯೇ ? ನಾವೆಲ್ಲರೂ ಜೈಲಿಗೆ ಹೋಗುತ್ತೇವೆ. ನೀವೇ ಮಂತ್ರಾಕ್ಷತೆ ಹಂಚಿ ಎಂದು ಕಿಡಿಕಾರಿದ್ದಾರೆ.