ಪ್ರತಿನಿಧಿ ವರದಿ ಕೃಷ್ಣರಾಜಪೇಟೆ
ನೇಕಾರ ತೊಗಟವೀರ ಸಮಾಜದ ಬಂಧುಗಳು ಸಂಘಟಿತರಾಗಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರೋತ್ಸಾಹಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ.ವಾಸು ಹೇಳಿದರು.
ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ಸಮುಧಾಯ ಭವನದಲ್ಲಿ ಆಯೋಜಿಸಿದ್ದ ತೊಗಟವೀರ ಸೇವಾ ಸಮಾಜದ ಸಭೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ತೊಗಟವೀರ ಸೇವಾ ಸಮಾಜದ ಅಧ್ಯಕ್ಷ ಎಸ್.ಎನ್.ರಾಧಾಕೃಷ್ಣ ಮಾತನಾಡಿ, ವಿದ್ಯಾರ್ಥಿನಿಲಯ ಮತ್ತು ಶಿಶುವಿಹಾರ ನಿರ್ಮಾಣ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ಕೊರತೆಯಿರುವುದರಿಂದ ಶಾಸಕರು ಹಾಗೂ ಸಂಸದರಾದ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಮಧು ಜಿ.ಮಾದೇಗೌಡ ಹಾಗೂ ಸಿ.ಎನ್.ಮಂಜೇಗೌಡ ಅವರಿಂದ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಪಡೆಯಲು ಲೋಕಸಭಾ ಚುನಾವಣೆಯ ನಂತರ ಭೇಟಿ ಮಾಡುವುದು. ನಿವೇಶನಗಳ ಭೂಮಿ ಪೂಜೆ ಮಾಡಿ ಕಾಮಗಾರಿಯನ್ನು ಚಾಲನೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.
ಪಿಎಲ್ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಶಿಕ್ಷಣ ತಜ್ಞ ಕೆ.ಆರ್.ಪುಟ್ಟಸ್ವಾಮಿ, ಸಂಘದ ಗೌರವಾಧ್ಯಕ್ಷ ವಿಶ್ರಾಂತ ಎಂಜಿನಿಯರ್ ವೆಂಕಟೇಶ್, ಧಾನಿಗಳಾದ ಕೆ.ಆರ್.ನಾಗರಾಜಶೆಟ್ಟಿ, ಕಬಾಬ್ ನಾರಾಯಣಪ್ಪ, ಮೈಸೂರು ಲಕ್ಷ್ಮೀ ಕಾಂತ್, ಸರಗೂರಿನ ಗೋಪಾಲಕೃಷ್ಣ, ಜನಾರ್ಧನ್ ಸಭೆಯಲ್ಲಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಹೆಚ್.ಎಂ.ಚಂದ್ರಶೇಖರ್, ನಿರ್ದೇಶಕರಾದ ವಿದ್ಯಾರ್ಥಿ ಭಂಡಾರ್ ಸುರೇಶ್, ಕೆ.ಎಸ್.ಮೋಹನಕುಮಾರ್, ಅರಳಕುಪ್ಪೆ ರಾಜಣ್ಣ, ಶ್ರೀರಂಘಪಟ್ಟಣ ರವಿಕುಮಾರ್, ಸರಗೂರಿನ ರಂಗಸ್ವಾಮಿ, ಗೋವರ್ಧನ್, ಪ್ರಕಾಶ್, ಎಸ್.ಮಂಜಪ್ಪ, ಸಿ.ನಾರಾಯಣಸ್ವಾಮಿ, ಕೆ.ಎಸ್.ಮಧುಸೂದನ್, ಉಂಡಿಗನಹಾಳು ಬಸವರಾಜು ಮತ್ತಿತರರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.