ಮಂಡ್ಯ: ಕಾಂಗ್ರೆಸ್ನ ಮುಖಂಡನಾಗಿ ಕಾಂಗ್ರೆಸ್ನವರು ಮಾಡಿದ ಯಾವ ಪ್ರಯತ್ನವೂ ನನ್ನ ವಿರುದ್ಧ ನಡೆಯುವುದಿಲ್ಲ, ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ತನ್ನ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮತನಾಡಿದ ಕುಮಾರಸ್ವಾಮಿ “ಲೀಡ್ ಎಷ್ಟು ಅಂತ ಮುಖ್ಯವಲ್ಲ. ಜನ ಗೆಲ್ಲಿಸಬೇಕು ಅಂತ ತೀರ್ಮಾನ ಮಾಡಿದ್ದಾರೆ, ನನಗೆ ಸ್ಪರ್ಧೆ ಅನಿವಾರ್ಯ ಆಗಿರಲಿಲ್ಲ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಸ್ಪರ್ಧೆ ಮಾಡಿದ್ದೇನೆ” ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿ ಹೊಸದಾಗಿದ್ದು, ಈ ಸಲ ಜನರು ಮಚ್ಚಿಕೊಂಡು ಬೆಂಬಲವನ್ನು ಸೂಚಿಸಿದ್ದಾರೆ ಎಂದು ಮುಖ್ಯವಾಗಿ ಹೇಳಿಕೊಂಡರು.