ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ನಿವೃತ್ತ ಕಾರ್ಯದರ್ಶಿ ಎನ್.ನಂಜುಂಡಸ್ವಾಮಿ ಪುತ್ರ ಎನ್.ಮಂಜುನಾಥ್(43) ಹೃದಯಾ ಘಾತದಿಂದ ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿರುವ ಜಮೀನಿನಲ್ಲಿ ಮಂಗಳವಾರ ನೆರವೇರಿತು.
ತಂದೆಯ ಸಾವಿನಲ್ಲೂ ಪರೀಕ್ಷೆ ಬರೆದ ಮಗಳು : ಹೃದಯಾಘಾತದಿಂದ ಮೃತಪಟ್ಟ ವೈ.ಎನ್.ಮಂಜುನಾಥ್ ಎರಡನೇ ಪುತ್ರಿ ಸಂಜನಾ ತಂದೆಯ ಸಾವಿನಲ್ಲೂ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಬರೆದಳು. ಮಂಗಳವಾರ ಗಣಿತ ವಿಷಯ ಪರೀಕ್ಷೆ ಇತ್ತು ಸೋಮವಾರ ಮೃತಪಟ್ಟ ಮಂಜುನಾಥ್ ಅವರನ್ನು ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ತಂದೆ ಸಾವಿನ ದುಃಖದಲ್ಲಿಯೇ ಅಂತ್ಯ ಸಂಸ್ಕಾರದಲ್ಲಿಯೂ ಪಾಲ್ಗೊಳ್ಳದೇ ಪರೀಕ್ಷೆ ಬರೆದಳು.