ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ಮಾನಸಿಕ ಸದೃಢತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ, ಯೋಗಭ್ಯಾಸ ಅಗತ್ಯವೆಂದು ಪಟ್ಟಣದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿ.ಎನ್.ಜಗದೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದಿನನಿತ್ಯ ಯೋಗ ಮಾಡುವುರಿಂದ ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಯೋಗಭ್ಯಾಸ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶ ಅರುಣ್ ಕುಮಾರಿ, ಅಧಿಕ ಹಿರಿಯ ಸಿವಿಲ್ ನ್ಯಾಯಧೀಶ ಅರುಣ್ ಗುಡಿಗಣ್ಣನವರ್, ಪ್ರಧಾನ ಸಿವಿಲ್ ನ್ಯಾಯಧೀಶ ಬಿ.ಸಿ.ದೀಪು, ಅಧಿಕ ಸಿವಿಲ್ ನ್ಯಾಯಧೀಶೆ ಎಸ್.ರಶ್ಮಿ, ಎರಡನೇ ಸಿವಿಲ್ ನ್ಯಾಯಧೀಶೆ ಪಿ.ಮಮತಾ, ಮೂರನೇ ಸಿವಿಲ್ ನ್ಯಾಯಧೀಶೆ ಸುನೀತಾ, ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಂದರ್ ರಾಜ್ ಮುಂತಾದವರಿದ್ದರು. ಯೋಗ ಶಿಕ್ಷಕ ಸಿ.ಎನ್.ಅಶೋಕ್, ನ್ಯಾಯಾಧೀಶರಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಯೋಗಭ್ಯಾಸ ಮಾಡಿಸಿದರು.