ಪ್ರತಿನಿಧಿ ವರದಿ ಹಾಸನ
ಏನೇ ಕೆಲಸ ಕಾರ್ಯಗಳಿದ್ದರೂ ಪ್ರತಿನಿತ್ಯ ಕೆಲ ಸಮಯ ಬಿಡುವು ಮಾಡಿಕೊಂಡು ಯೋಗ ಮಾಡುವುದರಿಂದ ಶರೀರದಲ್ಲಿ ಸಂಚಲನ ಉಂಟಾಗುತ್ತದೆ ಎಂದು ನಗರಸಭೆ ನಿವೃತ್ತ ಇಂಜಿನಿಯರ್ ಹಾಗೂ ಯೋಗ ಶಿಕ್ಷಕ ಮಂಜುನಾಥ್ ತಿಳಿಸಿದರು.
ನಗರದ ಹಾಸನ್ ಲಯನ್ಸ್ ಕ್ಲಬ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಯೋಗಪಟುವನ್ನು ಸನ್ಮಾನಿಸಿ ಅಭಿನಂಧಿಸಿದ ನಂತರ ಮಾತನಾಡಿದ ಅವರು, ಊಟ ಬಿಟ್ಟರೂ ಪ್ರತಿನಿತ್ಯದ ಯೋಗ ಬಿಡಬೇಡಿ. ಈ ನಿಟ್ಟಿನಲ್ಲಿ ನಾನು ಮೈಗೂಡಿಸಿಕೊಂಡಿದ್ದೇನೆ. ಬ್ರಾಹ್ಮಿ ಮುಹೂರ್ತ ಎಂದರೇ ಸೂರ್ಯ ಹುಟ್ಟುವ ಮೊದಲು ಎದ್ದು, ನಿತ್ಯಕರ್ಮವನ್ನು ಮುಗಿಸಿ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ವಾಕ್ ಮಾಡಿಕೊಂಡು ಯೋಗ ಪ್ರಾರಂಭಿಸಬೇಕು. ಯೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ನಿತ್ಯ ಯೋಗ ಮಾಡುವುದರಿಂದ ಶಾರೀರಿಕ, ಆದ್ಯಾತ್ಮಿಕವಾಗಿ ದೇಹಕ್ಕೆ ಅನುಕೂಲವಾಗುತ್ತದೆ ಎಂದರು. ಯೋಗ, ಪ್ರಾಣಾಯಾಮ, ಧ್ಯಾನ ಮೂರನ್ನು ಅಳವಡಿಸಿಕೊಳ್ಳಬೇಕು. ಯೋಗ ಅಳವಡಿಸಿಕೊಳ್ಳುವುದರಿಂದ ನಮ್ಮ ಶರೀರದಲ್ಲಿ ಚುರುಕುತನ ಮೂಡುತ್ತದೆ. ಸಂಜೆಗಿಂತ ಬೆಳಗ್ಗಿನ ಜಾವ ಯೋಗ ಮಾಡುವುದು ಉತ್ತಮ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ.ನಾಗೇಶ್, ಕಾರ್ಯದರ್ಶಿ ಸಿ.ಕೆ.ಕಿರಣ್ ಕುಮಾರ್, ಖಜಾಂಚಿ ಬಿ.ಎಂ.ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್.ಸೋಮಶೇಖರ್, ಲಿಯೋ ಕ್ಲಬ್ ಕಾರ್ಯದರ್ಶಿ ಸುವರ್ಚಲಾ, ಕಾರ್ಯದರ್ಶಿ ಸುಪ್ರಿತಾ, ಪ್ರಿಯಾ ಕಿರಣ್, ವಲಯ ಅಧ್ಯಕ್ಷ ಎಸ್.ಪಿ.ಪ್ರಕಾಶ್, ಮಾಜಿ ಗೌರ್ನರ್ ಬಿ.ವಿ.ಹೆಗಡೆ, ಲಿಯೋ ಹೊಸ ಪಿಎಸ್ಐಎಂಸಿಇನ ಅಧ್ಯಕ್ಷ ಬಿ.ಪಿ.ಶ್ರೇಯಾಂಕ್, ಕಾರ್ಯದರ್ಶಿ ಕೆ.ಎಸ್.ಲಕ್ಷಣ್, ಖಜಾಂಚಿ ನಿಖಿಲ್ ಪ್ರಭು, ನೂತನ್ ಗೌಡ, ಹೆಚ್.ಎಂ.ಸುಕೃತಾ, ಶ್ರೇಯಾಂಕ್ ಇತರರು ಉಪಸ್ಥಿತರಿದ್ದರು.