ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಗ್ರಾಮದಲ್ಲಿ ಅಶ್ವಥ್ ಕಟ್ಟೆತ್ತು ನಾಗರಕಲ್ಲು ಜೀರ್ಣೋದ್ಧಾರದ ಪೂಜಾ ಕೈಂಕರ್ಯಗಳನ್ನು ಭಾರತಿ ಪಟ್ಟಾಭಿರಾಮು ಅವರ ನೇತೃತ್ವದಲ್ಲಿ ನಡೆಯಿತು.
ಗ್ರಾಮದ ಅಶ್ವಥ್ ಕಟ್ಟೆಯ ಜೀರ್ಣೋದ್ದಾರವನ್ನು ಎಲ್ಲರೂಸೇರಿ ಮಾಡಲಾಗಿದ್ದು, ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂಬ ಉದ್ದೇಶದೊಂದಿಗೆ ಇಂದಿನ ಯುವಕರು ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು. ಇದರಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಂತಹ ಸಂಪ್ರದಾಯ ಆಚರಣೆಗಳು, ಪದ್ಧತಿ ಮತ್ತು ಅದರ ಮಹತ್ವ ಮುಂದಿನ ಪೀಳಿಗೆಗೆ ತಲುಪಲಿದೆ ಎಂದರು.
ದೊಡ್ಡರಾಮಣ್ಣ ಮತ್ತು ಚಿಕ್ಕ ರಾಮಣ್ಣ ಕುಟುಂಬದವರು ಮತ್ತು ನಿಸರ್ಗ ನಿಶಾನಿ ಭಾಗವಹಿಸಿದ್ದರು.
21ಡಿಎಚ್ಎಲ್ ಪಿ-೨
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಗ್ರಾಮದಲ್ಲಿ ಅಶ್ವಥ್ ಕಟ್ಟೆತ್ತು ನಾಗರಕಲ್ಲು ಜೀರ್ಣೋದ್ಧಾರ, ರ್ಪೂಜಾ ಕೈಂಕರ್ಯಗಳನ್ನು ಭಾರತಿ ಪಟ್ಟಾಭಿರಾಮು ನೇತೃತ್ವದಲ್ಲಿ ನಡೆಯಿತು.